ಹೊಸ ವರ್ಷಾಚರಣೆ....!
"ಏನಪ್ಪಾ ಹೊಸ ವರ್ಷ ಆಚರಣೆಗೆ ಏನು ಪ್ಲಾನ್, ಎಲ್ಲಿ ಹೋಗ್ತೀರಾ..??" ಒಂದು ವಾರದಿಂದ ಎಲ್ಲಿ ಹೋದ್ರು ಈ ಪ್ರಶ್ನೆ ಸಾಮಾನ್ಯವಾಗಿ ಎಲ್ಲರಿಗೂ ಬಂದಿರತ್ತೆ, ನನಗೂ ತುಂಬಾ ಜನ ಈ ಪ್ರಶ್ನೆ ಕೇಳಿದ್ರು ಮತ್ತು ನಾನು ಸಹ ಬಹಳ ಮಂದಿಗೆ ಈ ಪ್ರಶ್ನೆ ಕೇಳಿದ್ದೇನೆ. ನಮ್ಮ ನಮ್ಮ ಮನಸ್ಸಲ್ಲಿಯೇ ಏನೇನೋ ಯೋಜನೆಗಳು ಹೀಗೆ ಮಾಡಿದ್ರೆ ಹೇಗೆ, ಹಾಗೆ ಮಾಡಿದ್ರೆ ಹೇಗೆ, ಅಲ್ಲಿ ಹೋಗೋಣ,ಇಲ್ಲಿ ಹೋಗೋಣ ಅಂತ. ಇವೆಲ್ಲದರ ಯೋಚನೆ ಮಾಡ್ತಿರೋವಾಗಲೇ ಥಟ್ಟನೆ ನನ್ನ ತಲೆಯೊಳಗೊಂದು ಯೋಚನಾ ಲಹರಿ ಬಂದು ಹೋಯಿತು, ನಾವೆಲ್ಲಾ ಚಿಕ್ಕವರಿದ್ದಾಗ ಹೇಗಿತ್ತು ಈ ಹೊಸ ವರ್ಷದ ಆಚರಣೆ ಎಂಬ ಪ್ರಶ್ನೆ ನನ್ನೊಳಗೆ ಮೂಡಿ ಬಂತು. ನೀವುಗಳು ಸಹ ಒಮ್ಮೆ ಆ ನೆನಪಿನಾಳಕ್ಕೆ ಹೋಗಿಬನ್ನಿ. ಎಲ್ಲೋ ಪುಸ್ತಕದ ಪೇಜುಗಳ ಮಧ್ಯೆ ಅಡಗಿಸಿ ಇಟ್ಟ ಒಂದು , ಎರಡು ಅಥವಾ ಐದು ರೂಪಾಯಿ ನೋಟುಗಳನ್ನು, ಟ್ರಂಕಿನ ಅಡಿಯಲ್ಲಿ ಬಚ್ಚಿಟ್ಟ ಚಿಲ್ಲರೆ ಕಾಸನ್ನು ಒಟ್ಟುಗೂಡಿಸಿ ಗ್ರೀಟಿಂಗ್ ಕಾರ್ಡು ತರಬೇಕಿತ್ತು. ಶಂಕರ್ನಾಗ್, ರಾಜ್ಕುಮಾರ, ಅಂಬರೀಶ್, ಪ್ರಭಾಕರ್ , ರವಿಚಂದ್ರನ್ ಪೋಟೋಗಳನ್ನೊಳಗೊಂಡ ಎಂಟಾಣೆಯ ಗ್ರೀಟಿಂಗ್ ಕಾರ್ಡು, ಅದರ ಹಿಂಬದಿಯಲ್ಲಿ "ಕರುವಿಗೆ ಹಸು ಇಷ್ಟ, ಹೂವಿಗೆ ದುಂಬಿಗೆ ಇಷ್ಟ, ಆಕಾಶಕ್ಕೆ ಸೂರ್ಯ ಇಷ್ಟ, ರಾತ್ರಿಲಿ ಚಂದ್ರ ಇಷ್ಟ , ನನಗೆ ನೀ ಇಷ್ಟ ನಿನಗೆ ನಾ ಇಷ್ಟ" ಎಂದು ಎಂದು ಬರೆದು, ಮನೆಯಲ್ಲಿ ಸಿಗೋ ಹಳೇ ಲಗ್ನಪತ್ರಿಕೆ ಕ