ಪೋಸ್ಟ್‌ಗಳು

ಮಾರ್ಚ್, 2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಶಿಕ್ಷಣ ಅವಶ್ಯಕ ಸೇವೆ ಅಲ್ಲವೇ ?

 ಶಿಕ್ಷಣ ಅವಶ್ಯಕ ಸೇವೆ ಅಲ್ಲವೇ ?  ಇತ್ತೀಚೆಗೆ ಸರ್ಕಾರಿ ನೌಕರರೆಲ್ಲಾ ಹಲವು ಬೇಡಿಕೆಗಳ ಈಡೇರಿಕೆಗಾಗಿ ಮುಷ್ಕರ ಹೂಡಿದರು. ಆಗ ಆರೋಗ್ಯ ಮತ್ತು ಸಾರಿಗೆ ಸೇವೆಗಳನ್ನು ಅತೀ ಅವಶ್ಯಕ ಎಂದು ಪರಿಗಣಿಸಲಾಯಿತು. ಆದರೆ ಶಿಕ್ಷಣ ?? ಪಸ್ತುತ ಶಿಕ್ಷಣ ಅವಶ್ಯಕ ಸೇವೆಯಾಗು ಪರಿಗಣನೆಯಾಗಿಲ್ಲದಿರುವುದು ದುರದೃಷ್ಟಕರವಾದುದು.   ಅಷ್ಟಕೂ ಶಿಕ್ಷಣವನ್ನು ಯಾಕೆ ಅತ್ಯಗತ್ಯ ಸೇವೆ ಅಂತ ಪರಿಗಣಿಸಬೇಕು ?  ಶಿಕ್ಷಣ ಏಕೆ ಬೇಕು ಅಂತ  ಯಾವುದೇ ವ್ಯೆಕ್ತಿಗೆ ಕೇಳಿದರೆ,  ಶಿಕ್ಷಣ ಬದುಕು ಕಟ್ಟಿಕೊಳ್ಳಲು , ತನ್ನ ಹಕ್ಕುಗಳನ್ನು ತಿಳಿಯಲು, ವ್ಯವಸ್ಥಿತ ಜೀವನ ನಡೆಸಲು, ಸರಿ ತಪ್ಪುಗಳನ್ನು ವಿಶ್ಲೇಷಿಸಲು, ವೃತ್ತಿ ಪಡೆದುಕೊಳ್ಳಲು, ಹಣ ಅಂತಸ್ತು ಮಾಡಿಕೊಳ್ಳಲು ಇತ್ಯಾದಿ... ಹೀಗೆ ಪ್ರತಿಯೊಬ್ಬರು ಶಿಕ್ಷಣದ ಅವಶ್ಯಕತೆಯನ್ನು ತಮ್ಮ ವೈಯುಕ್ತಿಕ ಚೌಕಟ್ಟಿನಲ್ಲಿ ವಿವರಿಸುತ್ತಾ ಹೋಗುತ್ತಾರೆ.  ಆದರೆ ಸಮಾಜದ ಒಳಿತಿಗಾಗಿ ಶಿಕ್ಷಣದ ಅವಶ್ಯಕತೆ ಏನು, ಒಂದು ದೇಶದ ಪ್ರಗತಿಯಲ್ಲಿ ಶಿಕ್ಷಣದ ಅವಶ್ಯಕತೆ ಏನು ಎಂಬುದರ ಬಗ್ಗೆ ವಿಶ್ಲೇಷಣೆಯಾಗುವುದಿಲ್ಲ. ಇದರಿಂದಾಗಿಯೇ ಶಿಕ್ಷಣ ಅತ್ಯವಶ್ಯಕ ಸೇವೆಯಾಗಿ ಪರಿಗಣನೆಯಾಗಿಲ್ಲ.   ಸಾಮಾಜಿಕ ನ್ಯಾಯಕ್ಕಾಗಿ, ತಳ ಸಮುದಾಯಗಳ ಆರ್ಥಿಕ/ಸಾಮಾಜಿಕ ಅಭಿವೃದ್ದಿಗಾಗಿ, ಶಾಂತಿಯುತ ಸಮಾಜಕ್ಕಾಗಿ, ಪ್ರಜಾಪ್ರಭುತ್ವ ರಕ್ಷಣೆಗಾಗಿ, ಜಾತ್ಯಾತೀತವಾದ ಜೀವನಕ್ಕಾಗಿ ಶಿಕ್ಷಣದ ಅವಶ್ಯಕತೆ ಮುಖ್ಯವಾಗಿದೆ.  ಒಟ್ಟಿನಲ್ಲಿ ಸಾಮಾಜಿಕ ಬದಲಾವಣೆಗಾಗಿ (Social Chang

ಪಂಡಿತ್‌ ನೆಹರು ಪ್ರೌಢಶಾಲೆ ಗುರುವಂದನಾ ಕಾರ್ಯಕ್ರಮದ ನೆನಪು

ಇಮೇಜ್
  ನಮಸ್ಕಾರ ಸ್ನೇಹಿತರೇ, ಈ ನೆನಪುಗಳೇ ಹಾಗೆ ಅಲ್ವಾ, ಸದಾ ಕಾಡುತ್ತವೆ, ಅಳಿಸುತ್ತವೆ, ನಗಿಸುತ್ತವೆ ಒಳಗೊಳಗೆ ಒಂಥರಾ ಖುಷಿ ನೀಡುತ್ತವೆ. ಇಂಥ ಎಲ್ಲಾ ಭಾವನೆಗಳನ್ನು ಒಮ್ಮೆಲೆ ಅನುಭವಿಸಿದ್ದು ನಮ್ಮ ಕೂಟಗಲ್‌ ನ ಪಂಡಿತ್‌ ನೆಹರೂ ಪ್ರೌಡಶಾಲೆಯ ಗುರುಗಳ ಗುರುವಂದನಾ ಕಾರ್ಯಕ್ರಮದಲ್ಲಿ. ನಮ್ಮ ಬ್ಯಾಚ್‌ ಅಂದರೆ ೧೯೯೯ ರ ಎಸ್‌ ಎಸ್ ಎಲ್‌ ಸಿ ಬ್ಯಾಚ್‌ ಗೆ ೨೫ ವರ್ಷ ತುಂಬಿತು. ಕಾಕತಾಳಿಯಾವೆಂಬಂತೆ ಈ ವರ್ಷವೇ ನಮ್ಮ ಶಾಲೆಯ ಹಿರಿಯ ವಿಧ್ಯಾರ್ಥಿಗಳ ತಂಡ ಗುರುವಂದನಾ ಕಾರ್ಯಕ್ರಮ ಏರ್ಪಡಿಸಿತ್ತು. ಈ ಕಾರ್ಯಕ್ರಮದ ಬಗ್ಗೆ ಗೊತ್ತಾದಾಗಲೇ ಮನಸ್ಸು  ಆ ದಿನಗಳ ನೆನಪುಗಳಿಗೆ ಜಾರಿಹೋಗಿತ್ತು. ಯಾವುದೇ ಕಾರಣಕ್ಕೂ ಈ ಕಾರ್ಯಕ್ರಮ ಮಿಸ್‌ ಮಾಡಲೇಬಾರದು ಎಂದು ನಿರ್ಧರಿಸಿಬಿಟ್ಟಿದ್ದೆ. ದಶಕಗಳ ನಂತರ ಆ ಶಾಲಾ ಕಟ್ಟಡದ ಆವರಣಕ್ಕೆ ಕಾಲಿಟ್ಟ ತಕ್ಷಣ ಮೈ ರೋಮಾಂಚನವಾಯಿತು. ೨೫ ವರ್ಷಗಳ ನೆನಪು ಒಮ್ಮೆಲೆ ಮೂಡಿಬಂತು. ಈ ಶಾಲೆ ಬಿಟ್ಟು ಹೋದ ಮೇಲೆ ಪಿಯು ಕಾಲೇಜು, ಡಿಗ್ರಿ ಕಾಲೇಜು, ಯೂನಿವರ್ಸಿಟಿಗಳಲೆಲ್ಲಾ ಕಲಿತ ನಮಗೆ ಅಲ್ಲಿನ ಯಾವುದೂ ನೆನಪಿಲ್ಲ, ಆದರೆ ೨೫ ವರ್ಷಗಳ ಹಿಂದೆ ಕಲಿತ ಈ ಶಾಲೆಯಲ್ಲಿ ಒಂದೊಂದು ಜಾಗದ ನೆನಪೂ ಒಂದೂಂದು ಘಟನೆಗಳೂ ಸಹ ಇನ್ನು ಮನಸ್ಸಿನಾಳದಲ್ಲಿ ಹಾಗೆಯೇ ಇದ್ದವು. ಈದಿನ ಅವುಗಳೆಲ್ಲಾ ಹಾಗೇ ಜಾರಿಬಂದವು. ಒಬ್ಬೊಬ್ಬರಾಗಿಯೇ ಹಳೇ ಸ್ನೇಹಿತರು ಜೊತೆ ಸೇರಿದರು, ಅವರ ಕಣ್ಣುಗಳಲ್ಲಿಯೂ ಸಹ ಆ ಅತೀವ ಆನಂದದ ಭಾವನೆಯನ್ನು ಕಾಣಬಹುದಾಗಿತ್ತು. ಎಲ್ಲರ