ಪೋಸ್ಟ್‌ಗಳು

ಜನವರಿ, 2017 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಮೌಲ್ಯಾಧಾರಿತ ಶಿಕ್ಷಣದ ಅವಶ್ಯಕತೆ

ಇಮೇಜ್
ದಿನಾಂಕ 20.01.2017 ರಂದು ವಿಜಯವಾಣಿ ದಿನಪತ್ರಿಕೆಯಲ್ಲಿ ಪ್ರಕಟಗೊಂಡ ನನ್ನ ಲೇಖನ.

ನಮ್ಮ ಹಿರಿಯರ ಹಬ್ಬಗಳು ಮತ್ತು ನಮ್ಮ ಇಂದಿನ ಮನೋಭಾವಗಳು

ಇಮೇಜ್
   ನಮ್ಮ ಹಿರಿಯರ ಹಬ್ಬಗಳು ಮತ್ತು ನಮ್ಮ ಇಂದಿನ ಮನೋಭಾವಗಳು (ನೇಸರ ಉದಯೋನ್ಮುಖ ಬರಹಗಾರರ ವೇದಿಕೆ, ಬೆಂಗಳೂರು ಸ್ಪರ್ಧೆಯಲ್ಲಿ ಮೊದಲನೇ ಬಹುಮಾನ ಪಡೆದ ಲೇಖನ) ಅದೊಂದು ಕಾಲದಲ್ಲಿ , ಹಬ್ಬವೆಂದರೆ ಇಡೀ ಊರಿಗೆ ಊರೇ ಸಂಭ್ರಮದಿಂದ ಸಜ್ಜುಗೊಳ್ಳುತ್ತಿತ್ತು , ಹಬ್ಬದಿ ಹಿಂದಿನ ದಿನದಿಂದ ಹಬ್ಬ ಮುಗಿದ ಮೂರು ದಿನಗಳ ತನಕವೂ ಅದೇ ಸಂಭ್ರಮದಲ್ಲಿ ಜನರು ತಮ್ಮ ಎಲ್ಲಾ ನೋವು ಕಷ್ಟ ಕಾರ್ಪಣ್ಯಗಳನ್ನು ಮರೆತುಬಿಡುತ್ತಿದ್ದರು . ಮನೆಯ ಮೂಲೆ ಮೂಲೆಯ ಕಸ ಕೊಳೆ ತೆಗೆದು ತೋರಣ - ತಳಿರುಗಳಿಂದ ಶೃಂಗಾರಗೊಳ್ಳುತ್ತಿದ್ದವು , ಇಲ್ಲಿ ಯಾವುದೇ ತೋರಿಕೆ ಇರುತ್ತಿರಲಿಲ್ಲ ಮತ್ತು ಆಡಂ ಭ ರವೂ ಇರುತ್ತಿರಲಿಲ್ಲ . ತಮ್ಮ ಬಳಿ ಇರುವ ವಸ್ತುಗಳೇ ಸಾಕಾಗುತ್ತಿದ್ದವು . ಅದಕ್ಕಿಂತ ಹೆಚ್ಚಾಗಿ ವರ್ಷದ ಕೆಲವು ಹಬ್ಬಗಳನ್ನು ಮಾತ್ರವೇ ಈ ರೀತಿ ವಿಜೃಂಭಣೆಯಿಂದ ಮಾಡಲಾಗುತಿತ್ತು . ನಾವೆಲ್ಲಾ ಚಿಕ್ಕವರಿದ್ದಾಗ ಹಬ್ಬದ ದಿನ ನಮ್ಮಗಳ ಅಪ್ಪಂದಿರು ಪೇಟೆಗೆ ಹೋಗಿ ಮದ್ಯ್ಹಾನದ ವೇಳೆ ಹಬ್ಬದ ಸಾಮಾನು ತರುತ್ತಿದ್ರು , ನಾವೆಲ್ಲಾ ಅವರ ಬರುವಿಕೆಯನ್ನೇ ಎದುರು ನೋಡುತ್ತಾ ಏನೇನು ತರಬಹುದು , ಯಾವ ಬಣ್ಣದ ಬಟ್ಟೆ ತರಬಹುದು , ಬಲೂನು ಪೀಪಿ ತರಬಹುದಾ ಎಂಬ ಕುತೂಹಲದಿಂದ ಕಾಯುತ್ತಿದ್ದೇವು . ಆ ಕುತೂಹಲದಲ್ಲಿದ್ದ ಖುಷಿ ಸಮಾನವಾದುದು ಯಾವುದೂ ಇಲ್ಲ . ಈಗ ಏನಾಗಿದೆ , ತಿಂಗಳಿಗೆ ಎರಡು ಹಬ್ಬಗಳು ಸಂಕಷ್ಟಿ , ಏಕಾದಶಿ , ಚತುರ್ಥಿ , ಗೌರಿ ವ್ರತ , ಲಕ್ಷ್ಮೀಪೂಜೆ ಹೀಗೆ .