ರೈತನ ಆತ್ಮಹತ್ಯೆ ಮತ್ತು ಪರಿಹಾರ ಧನ
ದಿನಬೆಳಗಾದರೆ ರೈತರ ಆತ್ಮಹತ್ಯೆ ಸುದ್ದಿ ಮಾಮೂಲಿಯಾಗಿ ಹೋಗಿದೆ, ಪ್ರಾರಂಭದ ದಿನಗಳಲ್ಲಿ ಮೊದಲ ಪುಟದಲ್ಲಿ ಸುದ್ದಿ ಮಾಡುತ್ತಿದ್ದ ಸುದ್ದಿಪತ್ರಿಕೆಗಳು ಸಹ ಈಗ ಮೆತ್ತಾಗಿವೆ, ಹಾಗು ಯಾವುದೋ ಒಮದು ಪುಟದ ಮೂಲೆಯನ್ನು ಇದಕ್ಕಾಗಿಯೇ ಮೀಸಲಾಗಿಟ್ಟಿವೆ. ಮೊದಮೊದಲು ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗಳಿಗೆ ಪೋಟೋಗ್ರಾಫರ್ ಸಮೇತ ಭೇಟಿ ನೀಡಿ ಪೋಸು ಕೊಟ್ಟು ಸೂತಕದ ಮನೆಯಲ್ಲೂ ತಮ್ಮ ಬೇಳೆ ಬೇಯಿಸಿಕೊಂಡ ಪುಢಾರಿಗಳು ಸಹ "ಅಯ್ಯೋ ದಿನಾ ಸಾಯೋರಿಗೆ ಅಳೋರ್ಯಾರು " ಅಂತ ಸುಮ್ಮನಾಗಿದ್ದಾರೆ. ನಾವೆಲ್ಲಾ ಕಾಲೇಜುದಿನಗಳಲ್ಲಿ ಓದುವಾಗ , ರೈತರ ಬಗೆಗಿನ ನಮ್ಮ ಪಠ್ಯಪುಸ್ತಕದ ಮಾಹಿತಿಗಳಲ್ಲಿ ರೈತ ಈ ದೇಶದ ಬೆನ್ನೆಲುಬು, ದೇಶ ಕಾಯೋ ಯೋಧ ನಿಗೆ ಸಮ ಈ ರೈತ ಎಂಬೆಲ್ಲಾ ಘೋಷಣೆಗಳನ್ನು ಓದಿ ನಾನು ಒಬ್ಬ ರೈತನ ಮಗನಾಗಿ ಹುಟ್ಟಿದಕ್ಕೆ ಖುಷಿ ಪಟ್ಟಿದೆ. ಆದರೆ ಈದಿನ ನಮ್ಮ ರೈತರ ಪಾಡನ್ನು ನೋಡಿದರೆ, ರೈತನಾಗಿ ಹುಟ್ಟುವುದೆ ಪಾಪವೆಂದೆನಿಸುತ್ತಿದೆ. ಆತ್ಮಹತ್ಯೆ ಪ್ರಹಸನಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿರುವ ಸರ್ಕಾರವೇ ಈಗ ರೈತನ ಆತ್ಮಹತ್ಯೆಯನ್ನು ಪ್ರೋತ್ಸಾಹಿಸುತ್ತಿದೆ. ಯಾಕೆ ಈ ರೀತಿ ಹೇಳುತ್ತಿದ್ದೇನೆ ಗೊತ್ತಾ ? ಕಳೆದ ಕೆಲವು ವಾರದ ಹಿಂದೆ ಸರ್ಕಾರವೇ ಘೋಷಣೆ ಮಾಡಿದಂತೆ ಆತ್ಮಹತ್ಯೆ ಮಾಡಿಕೊಂಡ ರೈತನಿಗೆ ಸರ್ಕಾರದಿಂದ 5 ಲಕ್ಷ ಪರಿಹಾರ ಸಿಗಲಿದೆ. ಈ ಪರಿಹಾರ ,ರೈತ ತೀರಿಕೊಂಡ ಮೇಲೆ ಆತನ ಕುಟುಂಬಕ್ಕೆ ನೆರವಾಗುತ್ತ