ಪೋಸ್ಟ್‌ಗಳು

ಡಿಸೆಂಬರ್ 4, 2018 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ದೇವಸ್ಥಾನದೊಳಗಿನ ಬಿಕ್ಷುಕರು..

ಮನುಷ್ಯನಿಗೆ ಜೀವನದಲ್ಲಿ ಬೇಸರವೆನಿಸಿದಾಗ ಅಥವಾ ಕಷ್ಟಗಳು ಬೆನ್ನತ್ತಿದಾಗ ಮನಸ್ಸಿಗೆ ಶಾಂತಿ ಕಂಡುಕೊಳ್ಳುವ ಸಲುವಾಗಿ ದೇವಸ್ಥಾನಗಳ ಮೊರೆ ಹೋಗುವುದು ಸಾಮಾನ್ಯ. ಇಲ್ಲಿ ಆಸ್ತಿಕತೆ ಅಥವಾ ನಾಸ್ತಿಕತೆಯ ಪ್ರಶ್ನೆ ಬೇಡ ಆದರೆ ದೇವಸ್ಥಾನಗಳಿಗೆ ತೆರಳಿ ಏಕಾಂತದಲ್ಲಿ ಸುಮ್ಮನೆ ಸ್ವಲ್ಪ ಸಮಯ ಕಳೆದರೆ ನೊಂದ ಮನಸ್ಸಿಗ ಸಾಂತ್ವನ ಸಿಗುವುದು ನಿಜ. ಇದು ಭಕ್ತಿಯಿಂದಲೂ ಇರಬಹುದು , ದೇವರ ಪವಾಡವೂ ಇರಬಹುದು ಅಥವಾ ದೇವಸ್ಥಾನದ ಪರಿಸರದಲ್ಲಿನ ವೈಜ್ಞಾನಿಕ ಕಾರಣಗಳಿಂದಾಗಿಯೂ ಇರಬಹುದು. ಹೇಗೆ   ಎಂಬ ಪ್ರಶ್ನೆ ಗಿಂತ ಕೊಂಚವಾದರು ನೆಮ್ಮದಿ ದೊರಕಿತೆ ಎಂಬುದು ಮುಖ್ಯ. ಇಂಥ ಕಾರಣಕ್ಕಾಗಿಯೇ ಹಲವಾರು ಜನ ದೇವಸ್ಥಾನಗಳಿಗೆ ಬರುತ್ತಾರೆ. ಆದರೆ ದೇವಸ್ಥಾನದ ಪರಿಸರ ನೆಮ್ಮದಿ ಅರಸಿ ಬರುವವರ ತಾಳ್ಮೆಗೆಡಿಸುವಂತೆ ಇದ್ದರೆ ಅದರ ಪರಿಣಮ ಏನಾಗಬಹುದು ಎಂಬುದನ್ನು ಯೋಚಿಸಿ. ನಾನು ದೇವರ ವಿರೋಧಿಯಲ್ಲ , ದೇವ ಬಗೆಗೆ ಒಂದು ಹಂತದ ಭಕ್ತಿ ನನಗೂ ಇದೆ ಹಾಗು ಮನಸ್ಸಿಗೆ ಶಾಂತಿ ಬಯಸಿ ದೇವಸ್ಥಾನಗಳಿಗೆ ಹೋಗುವ ಅನೇಕಾನೇಕರಲ್ಲಿ ನಾನೂ ಸಹ ಒಬ್ಬ.   ಆದರೆ ಇಂದಿನ ದೇವಸ್ಥಾನಗಳು ಶಾಂತಿ ನೆಮ್ಮದಿ ಬಯಸಿ ಬರುವ ಭಕ್ತಾದಿಗಳಿಗೆ ಪೂರಕವಾಗಿ ಇವೆಯೇ ಎಂಬುದು ನಾವು ಯೋಚಿಸಬೇಕಾದ ವಿಷಯ. ಹಲವು ದೇವಸ್ಥಾನಗಳು ಆಧ್ಯಾತ್ಮಿಕ ಕೇಂದ್ರಗಳಾಗಿ ಉಳಿದಿಲ್ಲ ಹಾಗು ಇವುಗಳು ವಾಣಿಜ್ಯ ಹಾಗು ವ್ಯವಹಾರಿಕ ಸ್ಥಳಗಳಾಗಿವೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ.ಭಕ್ತಾದಿಗಳಿಂದ ಹಣ ಪೀಕುವುದರಲ್ಲೇ ನಿ