ಪೋಸ್ಟ್‌ಗಳು

2017 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ನನ್ನವಳು ನನ್ನೊಲವಿನ ಬೆಳಕಿವಳು..!

ಇಮೇಜ್
ನನ್ನ ಮನೆ ಹಾಗು ಮನಕ್ಕೆ ಹೊಸ ಅತಿಥಿಯೊಬ್ಬರನ್ನು ನೀಡಲು ಕಾದಿರುವ ನನ್ನವಳಿಗಾಗಿ ಈ ಪದಪುಂಜಗಳ ಕಾಣಿಕೆ... ನಗುಮೊಗದಿ ಬಂದು ನೆಮ್ಮದಿಯ ತಂದವಳು ಕಣ್ಣೊರೆಸಿ ಕೈಹಿಡಿದು ಸಂತೈಸಿದವಳು ಮಡಿಲಲ್ಲಿ ಮಗುವಂತೆ ಮುದ್ದಿಸಿದವಳು ಹುಸಿಕೋಪದಲ್ಲೇ ಬೊಗಸೆ ಬೊಗಸೆ ಪ್ರೀತಿ ನೀಡಿದವಳು ನನ್ನವಳು ನನ್ನ ಮಮತೆಯ ಕಣ್ಣಿವಳು..! ನನ್ನೊಳಗೆ ತನ್ನವರನ್ನೆಲ್ಲಾ ಕಂಡುಕೊಂಡವಳು ನನಗಾಗಿ ತನ್ನತನವ ಕಳೆದುಕೊಂಡವಳು ನನ್ನ  ನಗುವಲ್ಲೀ ತನ್ನ ನೋವ ಮರೆತವಳು ನನ್ನವಳು  ನನ್ನೊಲವಿನ ಬೆಳಕಿವಳು..! ಬದುಕಿಗೆ ಭರವಸೆಯ ಬೆಳಕು ತಂದವಳು ಮಧುರ ಭಾಂಧವ್ಯಕ್ಕೆ ಅರ್ಥ ನೀಡಿದವಳು ಕಂಕಣದ ಬಳೆಗಳ ಸದ್ದಿನೊಂದಿಗೆ ಬಂದವಳು ಮನದ ಕತ್ತಲೆಯನ್ನು ಹೊಸ್ತಿಲಮೇಲಿನ ಅಕ್ಕಿಬೆಲ್ಲದೊಡನೆ ಒದ್ದು ಪ್ರೀತಿಯ ಬೆಳಕು ಮೂಡಿಸಿದವಳು ನನ್ನವಳು ನನ್ನೊಳಗೆ ಬೆರೆತ ಉಸಿರಿವಳು..! ಅತ್ತೆ ಮಾವರಲ್ಲ ಅಪ್ಪ ಅಮ್ಮ ಎಂದವಳು ನನ್ನವರನ್ನೆಲ್ಲಾ ತನ್ನವರೆಂದುಕೊಂಡವಳು ನನ್ನ ಇಷ್ಟ ಕಷ್ಟಗಳ ಗ್ರಹಿಸಿಕೊಂಡವಳು ಬಂದ ನೋವುಗಳ ಸಹಿಸಿಕೊಂಡವಳು ನನ್ನವಳು ನನ್ನ ಜೀವನದ ಸಾರಥಿಯಿವಳು..! ಗೆಲುವೇ ಜೀವನ ಎಂದವನಿಗೆ ಒಲವೇ ಜೀವನ ಎಂದು ತೋರಿಸಿದವಳು ಬದುಕಿಗೊಂದು ಸಾರ್ಥಕತೆ ಮೂಡಿಸಿದವಳು ನನ್ನ ಪ್ರೀತಿಯ ತನ್ನೊಡಲಲ್ಲಿ ಬಚ್ವಿಟ್ಟು, ನನ್ನ ಮನೆಗೆ ಹೊಸ ಮುದ್ದು ಅತಿಥಿಯ ನೀಡಲು ಕಾದಿರುವವಳು ನನ್ನವಳು ನನ್ನೆದೆಯ ಮಿಡಿತ ಇವಳು..! -ಕನ್ನಡವೆಂಕಿ 21.11.2017

ಮೊದಲನೇ ವಾರ್ಷಿಕೋತ್ಸವದ ದಿನ ನನ್ನವಳಿಗಾಗಿ ಬರೆದ ಸಾಲುಗಳು...

ಇಮೇಜ್
ಇಳಿ ಸಂಜೆಯ ತಿಳಿ ಬೆಳಕಲಿ ನಿನ್ನ  ಕಣ್ಣ ಕಾಂತಿಯೇ ನನಗೆ ಸ್ಪೂರ್ತಿಯು ಪ್ರಾಸ ಮರೆತ ಪದ ಪುಂಜದಲ್ಲಿ ನಿನ್ನ ತುಟಿ ಅಂಚಿನ ಮೌನವೇ ಕವಿತೆಯು ಬದುಕಿಗಷ್ಟು ಬಣ್ಣ ಕನಸಿಗಿನ್ನೂ ಕಣ್ಣ ಹುಡುಕುತಲಿ ಅಲೆಯುತಿದ್ದಾಗ ಬಂದವಳು ನೀನು ಜಗವೆಲ್ಲ  ಬರಡಾಗಿ ನನ್ನೊಳಗೆ ನೀನಿರೆ ಅನುದಿನ ಅಷ್ಟೇ ಸಾಕು ಎನ್ನುವೆನು ನಾನು ನಿನಗೆಂದೆ ಬರೆದ ಈ ಸಾಲನು ನಿನ್ನ ಕಿವಿ ಅಂಚೆಯಲಿ ಹಾಕುತಲಿರುವೆ ಲೋಕವೆಲ್ಲ ಕಿವುಡಾಗಿ ನಿನಗೊಬ್ಬಳಿಗೆ ಕೇಳಬೇಕಿದೆ ಮನದ ಈ ಮಾತು.. ಜೊತೆಯಿರಲಿ ಎಂದೆಂದೂ ನಿನ್ನ ಸಾರಥ್ಯ ಮರೆಸುವುದೆನಗೆ ಎಲ್ಲ ನೋವ ನಿನ್ನ ಸಾಂಗತ್ಯ ಕ್ಷಣದಲ್ಲೇ ಕಳೆದೊಯ್ತು ಒಂದು ವರುಷ ನಿನ್ನ ಮಡಿಲು ನೀಡಿದೆ ಮೈಮರೆವ ಹರುಷ ಈ ಜೀವ ಜೀವನಕೆ ಸದಾ ಹಸಿರಾಗಿರು ಸದಾ ನನ್ನ ಉಸಿರಾಗಿರು..  ಮೊದಲನೇ ವರ್ಷದ ಶುಭಾಶಯಗಳು ನನ್ನೊಲವೆ..

ಅಚ್ಚೇ ದಿನಾ ಅಂದ್ರೆ ಏನು ಶಿವಾ....?

ನಾವು ಇಸ್ಕೂಲ್‌ ಲಿ ಓದೋವಾಗ ನಮ್ಮ ಹಿಂದಿ ಮೇಷ್ಟ್ರು "ಅಚ್ಚೇ ದಿನ್‌" ಅಂದ್ರೆ ಒಳ್ಳೆಯ ದಿನಗಳು ಅಂತ ಹೇಳಿಕೊಟ್ಟಿದ್ರು.ನಾವು ಅದನ್ನೇ ಕಲ್ತ್ಕೊಂಡು ಒಳ್ಳೆ ದಿನಗಳು ಬರ್ತವೆ ಅಂತಕಾಯ್ತಿದ್ವಿ ಆದ್ರೆ ಈಗ ನೋಡುದ್ರೆ ಅಚ್ಚೇ ದಿನ ಅನ್ನೋದಕ್ಕೆ ಅರ್ಥಾನೆ ಬದಲಾಗಿ ಹೋಗಿದೆ ! ಅಚ್ಚೇದಿನ ಅಂದ್ರೆ "ದುಬಾರಿ ದಿನ" ಅಂತ ಅರ್ಥ ಮಾಡ್ಕೋಬೇಕಿದೆ. ಹೆಂಗೆ ಅಂತೀರಾ ಇಲ್ಲೋಡಿ, ಎರಡು ವರ್ಷದ ಹಿಂದೆ ಒಬ್ಬ ನಾ ಅಚ್ಚೇ ದಿನಗಳನ್ನು ತರ್ತೀನಿ ಅಂತ ಬೊಂಬಡ ಹೊಡ್ಕೊಂಡು ಬಂದ. ನಾವುಗಳು ಸಹ ಇನ್ಮೇಕೆ ಒಳ್ಳೇ ದಿನಗಳು ಬರ್ಬೋದು ಶಿವಾ ಅಂತ ಕಣ್ಣು ಕಿವಿ ಬುಟ್ಕೊಂಡು ಕಾಯ್ತಾ ಕುಂತಿದ್ವಿ. ಅಚ್ಚೇ ದಿನಗಳು ಇನ್ನೇನು ಬರಬಹುದು, ಈಗ ಬರಬಹುದು, ಆಗ ಬರಬಹುದು ಅಂತ ಕಾಯ್ತಾ ಕುಂತಿರೋವಾಗಲೇ ಕತ್ತು ಎತ್ತಿ ನೋಡುದ್ರೆ ಈ ಅಸಾಮಿ ದೇಶ ಸುತ್ತೋಕೆ ನಮ್ಮ ತಲೇ ಮೇಲೆ ಇಮಾನ ಬುಟ್ಕೊಂಡು ಹೊಂಟುಬುಡೋದಾ.. ಹೋಗ್ಲಿ ದೇಶಗಳನ್ನೆಲ್ಲಾ ಸುತ್ಕೊಂಡು ನಮ್ಮ ದೇಶಕ್ಕೆ ಒಳ್ಳೆದಾಗೋ ಹಾಗೇ ಏನೋ ಮಾಡ್ಕೊಂಡು ಬರಲಿ ಅಂತ ಕಾಯೋರು ನಾವು ಕಾಯ್ತಾನೆ ಕುಂತಿದ್ವಿ. ದೇಶಕ್ಕೆ ವಾಪಸ್ಸು ಬರೋವಾಗ ಈವಪ್ಪಾ ತರೋ ಕಪ್ಪು ಹಣದಲ್ಲಿ ನಮಗೂ ಒಂದಿಷ್ಟು ಪಾಲು ಬತ್ತದೇ ಅಂತ ಮಡಕೆ ಒಳಗೆ ಮಡಿಚಿ ಇಟ್ಟಿದ್ದ ದುಡ್ಡನ್ನೆಲ್ಲಾ ತೆಗೆದು ಆಧಾರ್ ಕಾರ್ಡು, ಹಸ್ರು ಕಾರ್ಡು ತಗೋಂಡು ಬ್ಯಾಂಕ್‌ ಗೆ ಹೋಗಿ ನಮ್ಮದೂ ಒಂದು ಅಕೌಂಟ್‌ ಮಾಡ್ಸಿ ಪಾಸ್‌ಬುಕ್ ತಂದು ಅದೇ ಮಡಕೆ ಒಳಗೆ ಬಚ್ಚಿಟ್ವಿ. ಅಕೌಂಟ

ಪ್ರೀತಿಗೆ ಮತ್ತೊಂದು ಹೆಸರೇ ಕಾಳಜಿ ಅಲ್ವಾ ....?

ಇಮೇಜ್
ಎಲ್ಲೆಡೆ ಈದಿನ ಪ್ರೇಮಿಗಳ ದಿನದ ಸಂಭ್ರಮ, ಕೆಂಪುಗುಲಾಬಿಗೆ ಎಂದೂ ಕಾಣದ ಬೇಡಿಕೆ. ಪ್ರೇಮ ನಿವೇದನೆಗಾಗಿ ಕೊಟ್ಟ ಗುಲಾಬಿ ಬಾಡುವಷ್ಟರಲ್ಲೇ ಒಡೆದು ಹೋಗುವ ಅದೆಷ್ಟೋ ಹೃದಯಗಳು..... ಪ್ರೇಮಿಗಳ ದಿನ ನಮ್ಮ ಸಂಸ್ಕೃತಿಗೆ ವಿರುದ್ದವಾದುದು ಎಂದು ವಿರೋಧಿಸುವ ಕೆಲವು ಸಂಘಟನೆಗಳು.. ಹೀಗೆ ಪ್ರತೀ ವರ್ಷ ಈ ದಿನ ಬರುತ್ತೆ ಹೋಗುತ್ತೇ, ಆದರೆ ಈ ಪ್ರೇಮಿಗಳ ದಿನ ಕೇವಲ ಹದಿಹರೆಯದ ಹುಡುಗ ಹುಡಿಗಿಯ ನಡುವಿಗೆ ಪ್ರೇಮಕ್ಕೇ ಮಾತ್ರವೇ ಸೀಮಿತವೇ..? ಹುಡುಗ ಹುಡುಗಿ ಕೈ ಕೈ ಹಿಡಿದು ಪಾರ್ಕ್, ಸಿನಿಮಾ, ಹೋಟೆಲ್ ಸುತ್ತಿದೋ ಒಂದು ಸಂಭ್ರಮವೇ ? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಿದೆ. ಪ್ರೀತಿಗೆ ಯಾವುದೇ ಬೇಲಿಯಿಲ್ಲ, ಅದು ಯಾರಲ್ಲಿ ಬೇಕಾದರೂ ಇರಬಹುದು, ಹುಡುಗ ಹುಡುಗಿ ಮಾತ್ರವಲ್ಲ, ಅಪ್ಪ-ಮಗಳು, ಅಮ್ಮ-ಮಗ, ಅಕ್ಕ -ತಮ್ಮ, ಅಣ್ಣ-ತಂಗಿ, ಸ್ನೇಹಿತರು, ಗುರುಗಳು ಇತ್ಯಾದಿ... ಇವುಗಳಲೆಲ್ಲಾ ನಾವು ಪ್ರೀತಿ ಹುಡುಕಬೇಕಿದೆ... "ಇಡೀ ಜಗತ್ತಿನಲ್ಲಿಯೇ ನನ್ನ ಮಗನೇ ನನ್ನ ಸರ್ವಸ್ವ" ಎನ್ನುವ ಅಮ್ಮನದು ಪ್ರೀತಿ. "ಜವಾಬ್ದಾರಿಯಿಂದ ಬದುಕುವುದನ್ನು ಕಲಿ, ಸರಿಯಾದವರ ಸಹವಾಸ ಮಾಡು" ಎಂದು ಸದಾ ಗದರುವ ಅಪ್ಪನ ಕಾಳಜಿಯೇ ಪ್ರೀತಿ. "ನಿನಗೇ ಅಂತ ಒಂದು ಹುಡುಗಿ ನೋಡಿದೀನಿ ಕಣೋ, ಇದಕ್ಕಿಂತ ಚಂದ ಇರೋ ಹುಡುಗಿ ಸಿಗಲ್ಲಾ ನೋಡೋ" ಅನ್ನೋ ಅಕ್ಕನದು ಪ್ರೀತಿ. "ಯಾಕೋ ಒದ್ದಾಡ್ತಿಯಾ ಒಬ್ಬನೇ, ನಾನಿಲ್ಲವಾ ನೋಡ್ಕೋತೀನಿ ಬಿಡು"

ಮೌಲ್ಯಾಧಾರಿತ ಶಿಕ್ಷಣದ ಅವಶ್ಯಕತೆ

ಇಮೇಜ್
ದಿನಾಂಕ 20.01.2017 ರಂದು ವಿಜಯವಾಣಿ ದಿನಪತ್ರಿಕೆಯಲ್ಲಿ ಪ್ರಕಟಗೊಂಡ ನನ್ನ ಲೇಖನ.

ನಮ್ಮ ಹಿರಿಯರ ಹಬ್ಬಗಳು ಮತ್ತು ನಮ್ಮ ಇಂದಿನ ಮನೋಭಾವಗಳು

ಇಮೇಜ್
   ನಮ್ಮ ಹಿರಿಯರ ಹಬ್ಬಗಳು ಮತ್ತು ನಮ್ಮ ಇಂದಿನ ಮನೋಭಾವಗಳು (ನೇಸರ ಉದಯೋನ್ಮುಖ ಬರಹಗಾರರ ವೇದಿಕೆ, ಬೆಂಗಳೂರು ಸ್ಪರ್ಧೆಯಲ್ಲಿ ಮೊದಲನೇ ಬಹುಮಾನ ಪಡೆದ ಲೇಖನ) ಅದೊಂದು ಕಾಲದಲ್ಲಿ , ಹಬ್ಬವೆಂದರೆ ಇಡೀ ಊರಿಗೆ ಊರೇ ಸಂಭ್ರಮದಿಂದ ಸಜ್ಜುಗೊಳ್ಳುತ್ತಿತ್ತು , ಹಬ್ಬದಿ ಹಿಂದಿನ ದಿನದಿಂದ ಹಬ್ಬ ಮುಗಿದ ಮೂರು ದಿನಗಳ ತನಕವೂ ಅದೇ ಸಂಭ್ರಮದಲ್ಲಿ ಜನರು ತಮ್ಮ ಎಲ್ಲಾ ನೋವು ಕಷ್ಟ ಕಾರ್ಪಣ್ಯಗಳನ್ನು ಮರೆತುಬಿಡುತ್ತಿದ್ದರು . ಮನೆಯ ಮೂಲೆ ಮೂಲೆಯ ಕಸ ಕೊಳೆ ತೆಗೆದು ತೋರಣ - ತಳಿರುಗಳಿಂದ ಶೃಂಗಾರಗೊಳ್ಳುತ್ತಿದ್ದವು , ಇಲ್ಲಿ ಯಾವುದೇ ತೋರಿಕೆ ಇರುತ್ತಿರಲಿಲ್ಲ ಮತ್ತು ಆಡಂ ಭ ರವೂ ಇರುತ್ತಿರಲಿಲ್ಲ . ತಮ್ಮ ಬಳಿ ಇರುವ ವಸ್ತುಗಳೇ ಸಾಕಾಗುತ್ತಿದ್ದವು . ಅದಕ್ಕಿಂತ ಹೆಚ್ಚಾಗಿ ವರ್ಷದ ಕೆಲವು ಹಬ್ಬಗಳನ್ನು ಮಾತ್ರವೇ ಈ ರೀತಿ ವಿಜೃಂಭಣೆಯಿಂದ ಮಾಡಲಾಗುತಿತ್ತು . ನಾವೆಲ್ಲಾ ಚಿಕ್ಕವರಿದ್ದಾಗ ಹಬ್ಬದ ದಿನ ನಮ್ಮಗಳ ಅಪ್ಪಂದಿರು ಪೇಟೆಗೆ ಹೋಗಿ ಮದ್ಯ್ಹಾನದ ವೇಳೆ ಹಬ್ಬದ ಸಾಮಾನು ತರುತ್ತಿದ್ರು , ನಾವೆಲ್ಲಾ ಅವರ ಬರುವಿಕೆಯನ್ನೇ ಎದುರು ನೋಡುತ್ತಾ ಏನೇನು ತರಬಹುದು , ಯಾವ ಬಣ್ಣದ ಬಟ್ಟೆ ತರಬಹುದು , ಬಲೂನು ಪೀಪಿ ತರಬಹುದಾ ಎಂಬ ಕುತೂಹಲದಿಂದ ಕಾಯುತ್ತಿದ್ದೇವು . ಆ ಕುತೂಹಲದಲ್ಲಿದ್ದ ಖುಷಿ ಸಮಾನವಾದುದು ಯಾವುದೂ ಇಲ್ಲ . ಈಗ ಏನಾಗಿದೆ , ತಿಂಗಳಿಗೆ ಎರಡು ಹಬ್ಬಗಳು ಸಂಕಷ್ಟಿ , ಏಕಾದಶಿ , ಚತುರ್ಥಿ , ಗೌರಿ ವ್ರತ , ಲಕ್ಷ್ಮೀಪೂಜೆ ಹೀಗೆ .