ನಮಸ್ಕಾರ ಸ್ನೇಹಿತರೇ, ಈ ನೆನಪುಗಳೇ ಹಾಗೆ ಅಲ್ವಾ, ಸದಾ ಕಾಡುತ್ತವೆ, ಅಳಿಸುತ್ತವೆ, ನಗಿಸುತ್ತವೆ ಒಳಗೊಳಗೆ ಒಂಥರಾ ಖುಷಿ ನೀಡುತ್ತವೆ. ಇಂಥ ಎಲ್ಲಾ ಭಾವನೆಗಳನ್ನು ಒಮ್ಮೆಲೆ ಅನುಭವಿಸಿದ್ದು ನಮ್ಮ ಕೂಟಗಲ್ ನ ಪಂಡಿತ್ ನೆಹರೂ ಪ್ರೌಡಶಾಲೆಯ ಗುರುಗಳ ಗುರುವಂದನಾ ಕಾರ್ಯಕ್ರಮದಲ್ಲಿ. ನಮ್ಮ ಬ್ಯಾಚ್ ಅಂದರೆ ೧೯೯೯ ರ ಎಸ್ ಎಸ್ ಎಲ್ ಸಿ ಬ್ಯಾಚ್ ಗೆ ೨೫ ವರ್ಷ ತುಂಬಿತು. ಕಾಕತಾಳಿಯಾವೆಂಬಂತೆ ಈ ವರ್ಷವೇ ನಮ್ಮ ಶಾಲೆಯ ಹಿರಿಯ ವಿಧ್ಯಾರ್ಥಿಗಳ ತಂಡ ಗುರುವಂದನಾ ಕಾರ್ಯಕ್ರಮ ಏರ್ಪಡಿಸಿತ್ತು. ಈ ಕಾರ್ಯಕ್ರಮದ ಬಗ್ಗೆ ಗೊತ್ತಾದಾಗಲೇ ಮನಸ್ಸು ಆ ದಿನಗಳ ನೆನಪುಗಳಿಗೆ ಜಾರಿಹೋಗಿತ್ತು. ಯಾವುದೇ ಕಾರಣಕ್ಕೂ ಈ ಕಾರ್ಯಕ್ರಮ ಮಿಸ್ ಮಾಡಲೇಬಾರದು ಎಂದು ನಿರ್ಧರಿಸಿಬಿಟ್ಟಿದ್ದೆ. ದಶಕಗಳ ನಂತರ ಆ ಶಾಲಾ ಕಟ್ಟಡದ ಆವರಣಕ್ಕೆ ಕಾಲಿಟ್ಟ ತಕ್ಷಣ ಮೈ ರೋಮಾಂಚನವಾಯಿತು. ೨೫ ವರ್ಷಗಳ ನೆನಪು ಒಮ್ಮೆಲೆ ಮೂಡಿಬಂತು. ಈ ಶಾಲೆ ಬಿಟ್ಟು ಹೋದ ಮೇಲೆ ಪಿಯು ಕಾಲೇಜು, ಡಿಗ್ರಿ ಕಾಲೇಜು, ಯೂನಿವರ್ಸಿಟಿಗಳಲೆಲ್ಲಾ ಕಲಿತ ನಮಗೆ ಅಲ್ಲಿನ ಯಾವುದೂ ನೆನಪಿಲ್ಲ, ಆದರೆ ೨೫ ವರ್ಷಗಳ ಹಿಂದೆ ಕಲಿತ ಈ ಶಾಲೆಯಲ್ಲಿ ಒಂದೊಂದು ಜಾಗದ ನೆನಪೂ ಒಂದೂಂದು ಘಟನೆಗಳೂ ಸಹ ಇನ್ನು ಮನಸ್ಸಿನಾಳದಲ್ಲಿ ಹಾಗೆಯೇ ಇದ್ದವು. ಈದಿನ ಅವುಗಳೆಲ್ಲಾ ಹಾಗೇ ಜಾರಿಬಂದವು. ಒಬ್ಬೊಬ್ಬರಾಗಿಯೇ ಹಳೇ ಸ್ನೇಹಿತರು ಜೊತೆ ಸೇರಿದರು, ಅವರ ಕಣ್ಣುಗಳಲ್ಲಿಯೂ ಸಹ ಆ ಅತೀವ ಆನಂದದ ಭಾವನೆಯನ್ನು ಕಾಣಬಹುದಾಗಿತ್ತು. ಎಲ್ಲರ
ನನ್ನ ಮನೆ ಹಾಗು ಮನಕ್ಕೆ ಹೊಸ ಅತಿಥಿಯೊಬ್ಬರನ್ನು ನೀಡಲು ಕಾದಿರುವ ನನ್ನವಳಿಗಾಗಿ ಈ ಪದಪುಂಜಗಳ ಕಾಣಿಕೆ... ನಗುಮೊಗದಿ ಬಂದು ನೆಮ್ಮದಿಯ ತಂದವಳು ಕಣ್ಣೊರೆಸಿ ಕೈಹಿಡಿದು ಸಂತೈಸಿದವಳು ಮಡಿಲಲ್ಲಿ ಮಗುವಂತೆ ಮುದ್ದಿಸಿದವಳು ಹುಸಿಕೋಪದಲ್ಲೇ ಬೊಗಸೆ ಬೊಗಸೆ ಪ್ರೀತಿ ನೀಡಿದವಳು ನನ್ನವಳು ನನ್ನ ಮಮತೆಯ ಕಣ್ಣಿವಳು..! ನನ್ನೊಳಗೆ ತನ್ನವರನ್ನೆಲ್ಲಾ ಕಂಡುಕೊಂಡವಳು ನನಗಾಗಿ ತನ್ನತನವ ಕಳೆದುಕೊಂಡವಳು ನನ್ನ ನಗುವಲ್ಲೀ ತನ್ನ ನೋವ ಮರೆತವಳು ನನ್ನವಳು ನನ್ನೊಲವಿನ ಬೆಳಕಿವಳು..! ಬದುಕಿಗೆ ಭರವಸೆಯ ಬೆಳಕು ತಂದವಳು ಮಧುರ ಭಾಂಧವ್ಯಕ್ಕೆ ಅರ್ಥ ನೀಡಿದವಳು ಕಂಕಣದ ಬಳೆಗಳ ಸದ್ದಿನೊಂದಿಗೆ ಬಂದವಳು ಮನದ ಕತ್ತಲೆಯನ್ನು ಹೊಸ್ತಿಲಮೇಲಿನ ಅಕ್ಕಿಬೆಲ್ಲದೊಡನೆ ಒದ್ದು ಪ್ರೀತಿಯ ಬೆಳಕು ಮೂಡಿಸಿದವಳು ನನ್ನವಳು ನನ್ನೊಳಗೆ ಬೆರೆತ ಉಸಿರಿವಳು..! ಅತ್ತೆ ಮಾವರಲ್ಲ ಅಪ್ಪ ಅಮ್ಮ ಎಂದವಳು ನನ್ನವರನ್ನೆಲ್ಲಾ ತನ್ನವರೆಂದುಕೊಂಡವಳು ನನ್ನ ಇಷ್ಟ ಕಷ್ಟಗಳ ಗ್ರಹಿಸಿಕೊಂಡವಳು ಬಂದ ನೋವುಗಳ ಸಹಿಸಿಕೊಂಡವಳು ನನ್ನವಳು ನನ್ನ ಜೀವನದ ಸಾರಥಿಯಿವಳು..! ಗೆಲುವೇ ಜೀವನ ಎಂದವನಿಗೆ ಒಲವೇ ಜೀವನ ಎಂದು ತೋರಿಸಿದವಳು ಬದುಕಿಗೊಂದು ಸಾರ್ಥಕತೆ ಮೂಡಿಸಿದವಳು ನನ್ನ ಪ್ರೀತಿಯ ತನ್ನೊಡಲಲ್ಲಿ ಬಚ್ವಿಟ್ಟು, ನನ್ನ ಮನೆಗೆ ಹೊಸ ಮುದ್ದು ಅತಿಥಿಯ ನೀಡಲು ಕಾದಿರುವವಳು ನನ್ನವಳು ನನ್ನೆದೆಯ ಮಿಡಿತ ಇವಳು..! -ಕನ್ನಡವೆಂಕಿ 21.11.2017
ವಿದ್ಯಾಗಮ ಕಾರ್ಯಕ್ರಮ ನಿಲ್ಲಲು ಕಾರಣಗಳು ಹಾಗು ಅದರ ಹಿಂದಿರುವ ಕೈಗಳು ಯಾವುವು ಗೊತ್ತಾ... ಮುಂಬರುವ ಎಂ.ಎಲ್.ಸಿ ಎಲೆಕ್ಷನ್ ಲಿ ಕ್ಯಾಂಪೇನ್ ಮಾಡೋಕೆ ಶಿಕ್ಷಕರು ಬೇಕಿತ್ತು, ಒಳ್ಳೆ ಕಾರ್ಯಕ್ರಮದಿಂದ ಸರ್ಕಾರಿ ಶಾಲೆಗಳ ದಾಖಲಾತಿ ಹೆಚ್ಚಾಗ್ತ ಇದ್ದಿದ್ದು ನೋಡಿ ಖಾಸಗಿಯವರಿಗೆ ದಿಗಿಲಾಗಿತ್ತು, ಪ್ರಾಮಾಣಿಕವಾಗಿ ಬಡ ಮಕ್ಕಳೊಡನೆ ಬೆರೆತು ಕೆಲಸ ಮಾಡ್ತಿದ್ದ ಶಿಕ್ಷಕರನ್ನು ನೋಡಿ ಕೆಲವು ಸೋಮಾರಿ/ಅಪ್ರಮಾಣಿಕ ಶಿಕ್ಷಕರಿಗೆ ಇದನ್ನು ಹೇಗಾದರೂ ಮಾಡಿ ನಿಲ್ಲಿಸಬೇಕು ಎಂಬ ದುರಾಸೆ ಮೂಡಿತ್ತು ಇವರೆಲ್ಲಾರಿಗೂ ಕಂಡಿದ್ದು ಒಂದೇ ಕಾರಣ ಅದು "ಕರೋನಾ". ಇವರೆಲ್ಲಾ ಸೇರಿ ಲಜ್ಜೆಗೆಟ್ಟ ಮಾಧ್ಯಮಗಳಿಗೆ ಫಂಡ್ ಮಾಡಿದ್ವು, ಸಂಜನಾ, ಕಂಗನಾ, ರಾಗಿಣಿ ಹಿಂದೆ ಬಿದ್ದಿದ್ದ ಇವರಿಗೆ ಆಗೆಲ್ಲಾ ಈ ವಿದ್ಯಾಗಮ ಕಾಣಲೇ ಇರಲಿಲ್ಲ. ವಿದ್ಯಾಗಮ ಕಾರ್ಯಕ್ರಮದ ಆಳ ಅಗಲದ ಅರಿವೇ ಇಲ್ಲದ ಈ ಮಾನಗೆಟ್ಟ ಮಾದ್ಯಮಗಳು ಅದನ್ನೇ ದೊಡ್ಡದಾಗಿ ತೋರಿಸಿ ಇಡೀ ಕಾರ್ಯಕ್ರಮವನ್ನೇ ನಿಲ್ಲಿಸಿದರು. ಬಡ ಮಕ್ಕಳಿಗೆ ಮನೆಬಾಗಿಲಲ್ಲಿ ಸಿಗುತ್ತಿದ್ದ ಶಿಕ್ಷಣಕ್ಕೆ ಕಲ್ಲು ಹಾಕಿ ಅದು ನಮ್ಮಿಂದಲೇ ಅಂತ ನಾಚಿಕೆ ಬಿಟ್ಟ ಅಷ್ಟೂ ಮಾದ್ಯಮಗಳು ಪ್ರಚಾರ ಪಡೆದುಕೊಂಡವು. ವಿದ್ಯಾಗಮ ಕಾರ್ಯಕ್ರಮ ನಿಲ್ಲೋದರಿಂದ ಶಿಕ್ಷಕರಿಗಾಗಲಿ, ರಾಜಕಾರಣಿಗಳಿಗಾಗಲಿ, ಮಾನಗೆಟ್ಟ ಮಾಧ್ಯಮಗಳ ಪ್ರತಿನಿಧಿಗಳಿಗಾಗಲಿ ಯಾವುದೇ ನಷ್ಟವಿಲ್ಲ. ಯಾಕೆಂದ್ರೆ ಅವರ ಮಕ್ಳಳೆಲ್ಲಾ ಖಾಸಗಿ ಶಾಲೆಗಳಲ್ಲಿ
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ